Saturday, December 7, 2013
ಪ್ರಜೀವಾ ಪ್ರಚಾರ ಯೋಜನೆ
ಪ್ರಜೀವಾ ಪ್ರಚಾರ
ಯೋಜನೆ
ಪ್ರಜೀವಾವನ್ನು
ಮೊದಲು ಅದು ಪ್ರಕಟವಾಗುತ್ತಿರುವ ಮೈಸೂರು ನಗರದ ಲಕ್ಷಾಂತರ ಮನೆಗಳಿಗೆ ಪರಿಚಯಿಸುವ
ಮಹಾತ್ವಾಕಾಂಕ್ಷೆಯ ಯೋಜನೆಯಿದೆ.ಇದಕ್ಕಾಗಿ ಮನಮನೆಗೆ ಪ್ರಜೀವಾವನ್ನೊಯ್ದು ಚುಟುಕಾಗಿ, ಪರಿಣಾಮಕಾರಿಯಾಗಿ ಪರಿಚಯಿಸಿ ಪತ್ರಿಕೆಯ ಮಾರಾಟ ಮತ್ತು ಸ್ಪತ್ರಿಕೆಗೆ ಸದಸ್ಯತ್ವ
ಸಂಗ್ರಹವನ್ನು ಆಕರ್ಷಕ ಕಮಿಷನ್ ಆಧಾರದಲ್ಲಿ ಕೆಲಸ ಮಾಡಲು ಆಸಕ್ತರು ಬೇಕಾಗಿದ್ದಾರೆ.
೧.ಪ್ರಾಮಾಣಿಕತೆ, ೨. ಪರಿಶ್ರಮ ೩.
ಕಲಿಯಲು ಶ್ರದ್ಧೆ ಇರುವ ಯಾರಾದರೂ ನಮ್ಮನ್ನು ಸಂಪರ್ಕಿಸಬಹುದು.
ಕ್ಷೇತ್ರದಲ್ಲಿ ಪರೀಕ್ಷಾ ಮಾರಾಟ ಮಾಡಿದ್ದು ಉತ್ತೇಜಕ ಫಲಿತಾಂಶ
ಕಂಡುಬಂದಿದೆ. ಪೂರ್ಣಕಾಲಿಕ ಕಾರ್ಯಕರ್ತರು ಪ್ರಾಮಾಣಿಕವಾಗಿ ವರ್ಷಕ್ಕೆ ಲಕ್ಷಾಂತರ ರೂಪಾಯಿಗಳನ್ನು
ಸಂಪಾದಿಸಬಹುದಾಗಿದೆ. ಮೈಸೂರು ನಗರದಲ್ಲಿ ಈ ಯೋಜನೆ ಸಫಲ ಸಾಕಾರಗೊಂಡಮೇಲೆ ರಾಜ್ಯದ ಇತರ ನಗರ, ಪಟ್ಟಣಗಳಿಗೂ ಇದನ್ನು ವಿಸ್ತರಿಸಬಹುದಾಗಿದೆ.
ಸುರುಳಿ
ಸುರುಳಿ
ಪ್ರಜೀವಾದ
ಪ್ರಧಾನ ಸಲಹೆಗಾರರಾಗಿದ್ದು ನಮ್ಮನ್ನು ಹಲವು ರೀತಿಗಳಲ್ಲಿ ಬೆಂಬಲಿಸುತ್ತಾ, ಪತ್ರಿಕೆಗೆ ಒಂದು ಭದ್ರವಾದ ತಾತ್ವಿಕ ಅಡಿಪಾಯ ಹಾಕಿಕೊಟ್ಟಿದ್ದ ವಿಶ್ವಚೇತನ, ಮಹಾನ್ ಮೇಧಾವಿ, ಬಹುಭಾಷಜ್ಞ, ಲಕ್ಷಾಂತರ ಸಸ್ಯಗಳನ್ನರಿತ ಸಸ್ಯವಿಜ್ಞಾನಿ, ನಾಡೀಶಾಸ್ತ್ರ
ಪರಿಣತ, ಪ್ರಕೃತಿ ಚಿಕಿತ್ಸಕ, ಮಿಲಿಯಾಂತರ ಜನರಿಗೆ ಪ್ರಾಕೃತಿಕ ಆರೋಗ್ಯದ ಬೆಳಕನ್ನಿತ್ತ ಮಾನವತಾವಾದಿ, ಸರಳ ಸಜ್ಜನ ಡಾ|| ಪಳ್ಳತ್ತದ್ಕ ಕೇಶವ ಭಟ್ಟರು ೨೦೧೦ ಜುಲೈ ೨೫ ರಂದು
ಅಮೆರಿಕಾದಲ್ಲಿ ತಮ್ಮ ೭೧ ನೆಯ ವಯಸ್ಸಿನಲ್ಲಿ ದೇಹತ್ಯಾಗ ಮಾಡಿದರು. ಇದು ವಿಶ್ವದ ಮಾನವತೆಗೇ
ತುಂಬಲಾರದ ನಷ್ಟ. ಪ್ರಜೀವಾ ಬಳಗಕ್ಕಂತೂ ಭಾರೀ ಆಘಾತ.
ಇಂತಹ ಅತಿವಿರಳ ಸಾಧಕರ ಜೀವನ ಸಾಧನೆಗಳನ್ನು ಅವರೊಡನೆ ಒಡನಾಡಿದ ಬಂಧು ಬಾಂಧವರು, ಸಹಪಾಠಿಗಳು, ಸಹಚರಿಗಳು, ಅವರಿಂದ ಉಪಕೃತರಾದವರು – ಇವರೆಲ್ಲಾ ಕನ್ನಡ
ಹಾಗೂ ಆಂಗ್ಲ ಭಾಷೆಗಳಲ್ಲಿ ಬರೆದ ಮನೋಜ್ಞ ಲೀಖನಗಳುಳ್ಳ ಅಮೂಲ್ಯ ಸಂಸ್ಮರಣ ಸಂಪುಟ ‘ಸುರುಳಿ’ಯು ಡಾ|| ಪಿ.ಕೆ.ಭಟ್ಟರ ಮಗಳಾದ ಡಾ|| ಸುಮಾ ಪ್ರಮೋದ್
ರವರ ಸಮರ್ಥ ಸಂಪಾದಕತ್ವದಲ್ಲಿ ೧೬ ವರ್ಣಮಯ ಪುಟಗಳಲ್ಲಿ ವರ್ಣಮಯವಾದ ಅಪರೂಪದ ಚಿತ್ರಗಳನ್ನೊಳಗೊಂಡು
೪೦೮ ಪುಟಗಳಲ್ಲಿ ಪ್ರಕಟವಾಗಿದೆ. (ಬೆಲೆ ರೂ.೨೪೦.) ಇದು ಒಂದು ಸುಂದರ, ಸ್ಮರಣೀಯ ಕಾರ್ಯಕ್ರಮದಲ್ಲಿ ಉಡುಪಿಯ ಎಂ.ಜಿ.ಎಂ.ಕಾಲೇಜಿನಲ್ಲಿ ೧೧ ಅಗೋಸ್ತು ೨೦೧೧ ರಂದು
ಬಿಡುಗಡೆಯಾಗಿದೆ.
ದೇಶ, ದೇಹಗಳೊಳಗಿನ ಪರಿಸರವ ಕಾಯುವವರ್ಯಾರು?
ದೇಶ, ದೇಹಗಳೊಳಗಿನ ಪರಿಸರವ ಕಾಯುವವರ್ಯಾರು?
ಸಂಪಾದಕರ ಸರದಿ
- ಶಿವಕುಮಾರ, ಸಂಪಾದಕರು, 'ಪ್ರಜೀವಾ' ಮಾಸ ಪತ್ರಿಕೆ
Subscribe to:
Posts (Atom)